ಆತ್ಮಹತ್ಯೆ ಮಾಡಿಕೊಳ್ಳುವ ರೈತ ಹೇಡಿ ಎಂಬ ಕೃಷಿ ಸಚಿವ ಬಿ.ಸಿ.ಪಾಟೀಲ ಅವರ ಹೇಳಿಕೆ ಅನಗತ್ಯ ವಿವಾದ ಸೃಷ್ಟಿಸಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ವಸತಿ ಸಚಿವರಾಗಿದ್ದ ಚಿತ್ರನಟ ಅಂಬರೀಷ್, ರೈತರ ಆತ್ಮಹತ್ಯೆಗೆ ಪರಿಹಾರ ನೀಡುವುದು ಸಮಸ್ಯೆಯನ್ನು ನಿರ್ಮೂಲ ಮಾಡಿದಂತೆ ಅಲ್ಲ, ಮತ್ತಷ್ಟು ಆತ್ಮಹತ್ಯೆಗೆ ಉತ್ತೇಜನ ಕೊಟ್ಟಂತೆ ಎಂದಿದ್ದರು. ಈಗ ಪಾಟೀಲರ ಹೇಳಿಕೆಯಲ್ಲೂ ಅದೇ ಭಾವವಿದ್ದು, ಅವರ ಮಾತಿನ ಒಳಾರ್ಥವನ್ನು ಗ್ರಹಿಸದೆ ಕೇವಲ ಯಥಾರ್ಥವನ್ನು ಕುರಿತಷ್ಟೇ ಚರ್ಚಿಸಲಾಗುತ್ತಿದೆ.