ಜೇನು ಸಂತತಿ ನಾಶವಾಗುತ್ತಿರುವ ಬಗ್ಗೆ ಮಹೇಶ್ವರ ಹುರುಕಡ್ಲಿ ಅವರು ಹೇಳಿರುವುದು (ವಾ.ವಾ., ಡಿ. 10) ಅರ್ಥಪೂರ್ಣವಾಗಿದೆ. ಜೇನು ಸಂತತಿಯ ನಾಶದಿಂದ ಪರಾಗಸ್ಪರ್ಶ ನಡೆಯುವುದಾದರೂ ಹೇಗೆ? ಹಲವು ಪ್ರಭೇದದ ದುಂಬಿಗಳು ನಮ್ಮ ಅರಿವಿಗೇ ಬಾರದಂತೆ ನಮ್ಮ ಆಹಾರ ಉತ್ಪಾದನೆಗಾಗಿ ನಿರಂತರವಾಗಿ ದುಡಿಯುತ್ತಿವೆ. ಕೃಷಿಯಲ್ಲಿ ಬಳಸುತ್ತಿರುವ ಕ್ರಿಮಿನಾಶಕ, ಕಳೆನಾಶಕ, ರಾಸಾಯನಿಕ ಗೊಬ್ಬರಗಳು ದುಂಬಿಗಳ ಮಾರಣಹೋಮಕ್ಕೂ ಕಾರಣವಾಗಿವೆ. ರಾಸಾಯನಿಕಮುಕ್ತ ಸಹಜ ಕೃಷಿ ಪದ್ಧತಿ ಮಾತ್ರ ಜೇನು ಸಂತತಿಯನ್ನು ಉಳಿಸಬಲ್ಲದು.