ಕೊನೆಗೆ ಬಸ್ ಬಂತು. ಇಬ್ಬರೂ ಹತ್ತಿ ಅಕ್ಕಪಕ್ಕ ಕುಳಿತೆವು. ನಾನು ಆಟೊದವರ ನಡವಳಿಕೆಯನ್ನು ಅವರಲ್ಲಿ ಪ್ರಸ್ತಾಪಿಸಿದೆ. ‘ನಮ್ಮ ಇಲಾಖೆಯ ಕೆಲವು ಮೂರ್ಖರು ಮಾಡುವ ತಪ್ಪಿಗೆ ಎಲ್ಲರನ್ನೂ ಅನುಮಾನದಿಂದ ನೋಡುವಂತಾಗಿದೆ’ ಎಂದು ತುಂಬಾ ಬೇಸರದಿಂದ ಹೇಳಿದರು. ಹೌದು, ಕೆಲವು ಪೊಲೀಸರು ಆಟೊ ಹತ್ತುತ್ತಾರೆ, ದುಡ್ಡು ಕೊಡದೆ ಇಳಿದು ಹೋಗುತ್ತಾರೆ. ಯಾವುದೋ ಬಡಪಾಯಿ ಕಿರಾಣಿ ಅಂಗಡಿಯವನ ಹತ್ತಿರ ಗುಟ್ಕಾ, ಸಿಗರೇಟು ತೆಗೆದುಕೊಳ್ಳುತ್ತಾರೆ, ದುಡ್ಡು ಕೊಡದೆ ಹೋಗುತ್ತಾರೆ. ಹೋಟೆಲ್ನಲ್ಲಿ ಟೀ, ಕಾಫಿ ಕುಡಿಯುತ್ತಾರೆ, ದುಡ್ಡು ಕೊಡದೆ ಹೋಗುತ್ತಾರೆ. ಇದರಿಂದ ಪ್ರಾಮಾಣಿಕ ಪೊಲೀಸರನ್ನೂ ಜನ ಅನುಮಾನದಿಂದ ನೋಡುವಂತಾಗಿದೆ ಎಂದು ನಡು ವಯಸ್ಸಿನ ಆ ಪೊಲೀಸ್ ಕಾನ್ಸ್ಟೆಬಲ್ ಉದಾಹರಣೆಗಳನ್ನು ಕೊಟ್ಟರು. ‘ಅವಸರವಾಗಿ ಶಿವಮೊಗ್ಗಕ್ಕೆ ಹೋಗಬೇಕಾಗಿತ್ತು, ಆಟೊದವರ ಅವಾಂತರದಿಂದ ಲೇಟಾಯಿತು’ ಎಂದು ಗೊಣಗುತ್ತ ಬಸ್ ಇಳಿದರು.