ಬಸವ, ಕನಕ, ವಾಲ್ಮೀಕಿ, ಬುದ್ಧ, ಅಂಬೇಡ್ಕರ್, ಏಸು ಮುಂತಾದವರೆಲ್ಲಾ ಒಂದಲ್ಲಾ ಒಂದು ವಿಧದಲ್ಲಿ ಶ್ರೇಷ್ಠರು. ಇವರೆಲ್ಲರ ಚಿಂತನೆಗಳು ಪ್ರತಿಯೊಬ್ಬರಿಗೂ ಮಾದರಿ. ಇವರ ಜಯಂತಿಗಳನ್ನು ಜಾತಿ ಆಧಾರದ ಮೇಲೆ ಕಾಣುತ್ತಿರುವುದು ನಮ್ಮ ದೊಡ್ಡ ತಪ್ಪು. ರಾಜಕಾರಣಿಗಳು ಇದನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ.