ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಇಡೀ ರಾಷ್ಟ್ರದ ಜನರ ಹಿತ ಕಾಪಾಡುವ ಹೊಣೆ ಇದೆ. ಆದರೆ, ಈ ರಾಷ್ಟ್ರೀಯ ಪಕ್ಷವು ಲಸಿಕೆಯನ್ನು ಬಿಹಾರದ ಚುನಾವಣಾ ದಾಳವಾಗಿ ಉರುಳಿಸಿರುವುದು ಖಂಡನಾರ್ಹ. ವಾಸ್ತವದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಷ್ಟ್ರ ಹಾಗೂ ರಾಜ್ಯಗಳ ಬೊಕ್ಕಸದಲ್ಲಿ ಹಣವೇ ಇಲ್ಲದಂತಹ ಈ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ಉಚಿತ ಲಸಿಕೆ ವಿತರಿಸುವ ಭರವಸೆ ನೀಡಿದ್ದಾರೆ. ಇದನ್ನು ಗಮನಿಸಿದರೆ, ಕನಕದಾಸರ ‘ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ’ ಎಂಬ ಸಾಲುಗಳು ನೆನಪಾಗುತ್ತವೆ.