ಪ್ರಧಾನಮಂತ್ರಿಯವರು ಉತ್ತರಪ್ರದೇಶದ ಹರ್ದೋಯಿಯಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾಡಿದ ಭಾಷಣದಲ್ಲಿ, ‘ಕೋವಿಡ್ ಅವಧಿಯಲ್ಲಿ ರೇಶನ್ (ಪಡಿತರ ಧಾನ್ಯ) ನೀಡಿದರು. ಅವರ ಉಪ್ಪು ತಿಂದು ಅವರಿಗೆ ದ್ರೋಹ ಬಗೆಯುವುದಿಲ್ಲ’ಎಂದು ವೃದ್ಧೆಯೊಬ್ಬರು ಹೇಳಿದ್ದನ್ನು ಪ್ರಸ್ತಾಪಿಸಿದರು. ಮುಂದುವರಿದು, ‘ಮೊದಲೆಲ್ಲ ವ್ಯಾಕ್ಸಿನೇಷನ್ ಕೇವಲ ಕೆಲವು ದೊಡ್ಡವರನ್ನು ತಲುಪುತ್ತಿತ್ತು, ಬಡವರಿಗೆ ಚುಚ್ಚುಮದ್ದು ತಲುಪಲು 10–20 ವರ್ಷ (?) ತಗಲುತ್ತಿತ್ತು. ಈಗ ನಾವು ಎಲ್ಲರಿಗೂ ಲಸಿಕೆ ಲಭ್ಯವಾಗುವಂತೆ ನೋಡಿಕೊಂಡಿದ್ದೇವೆ’ ಎಂದರು. ‘ದೇಶೀಯ ವ್ಯಾಕ್ಸಿನ್ ಬಗೆಗೆ ಸಂದೇಹ ಹುಟ್ಟಿಸಿದರು’ ಅನ್ನುವ ಹಿಂದಿನ ಆರೋಪವನ್ನು ಪುನರುಚ್ಚರಿಸಿದರು.