ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗೆ ಎಂದು ನಿರ್ಮಲೆಯಾದಾಳು? ಬರಹಕ್ಕೆ ಪ್ರತಿಕ್ರಿಯೆ: ನಮ‌ಗೂ ಆ ಸ್ಥಿತಿ ಬಂದರೆ?

Last Updated 8 ನವೆಂಬರ್ 2019, 20:00 IST
ಅಕ್ಷರ ಗಾತ್ರ

‘ಗಂಗೆ ಎಂದು ನಿರ್ಮಲೆಯಾದಾಳು?’ ಎಂಬ ಟಿ.ಆರ್.ಅನಂತರಾಮು ಅವರ ಲೇಖನ ಓದಿ (ಪ್ರ.ವಾ., ನ. 6) ನಮ್ಮ ರಾಜ್ಯದ ನದಿಗಳ ವಸ್ತುಸ್ಥಿತಿ ಕಣ್ಮುಂದೆ ಸುಳಿಯಿತು. ಗಂಗೆ, ಯಮುನೆಯರಿಗೆ ಬಂದಿರುವ ಸ್ಥಿತಿ ನಮ್ಮ ಕೃಷ್ಣಾ, ಕಾವೇರಿಯರಿಗೂ ಬಂದರೆ ಎಂದು ಒಂದು ಕ್ಷಣ ಹೆದರಿಕೆಯಾಯಿತು.

ದೇಶವನ್ನು ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಿಸಿಯಾಗಿದೆ. ಆದರೆ, ನಮ್ಮಲ್ಲಿ ಹಲವರು ಸರ್ಕಾರ ನೀಡುವ ಸಹಾಯಧನದ ಆಸೆಗಾಗಿ ಮಾತ್ರ ಶೌಚಾಲಯ ಕಟ್ಟಿಸಿಕೊಂಡಿರುವುದಕ್ಕೆ ನೂರಾರು ನಿದರ್ಶನಗಳಿವೆ. ಏಕೆಂದರೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೇ ಹಾಹಾಕಾರ ಇರುವಾಗ ಶೌಚಕ್ಕೆ ನೀರಿನ ವ್ಯವಸ್ಥೆ ಎಲ್ಲಿರುತ್ತದೆ? ಹೀಗಾಗಿ ಆ ಶೌಚಾಲಯಗಳು ಕಟ್ಟಿಗೆ, ಗೊಬ್ಬರ ಮುಂತಾದ ವಸ್ತುಗಳನ್ನಿಡುವ ಕೋಣೆಗಳಾಗಿವೆ.

ಇನ್ನು ಪಟ್ಟಣಗಳಲ್ಲಿ ಎಲ್ಲೆಂದರಲ್ಲಿ ಕಾಣುವ ಮೋರಿಗಳು ಸೇರುವುದು ಸಹ ಜಲಮೂಲಗಳಾದ ಕೆರೆ, ಹಳ್ಳ, ನದಿಗಳ ಒಡಲನ್ನು. ಹೀಗಾಗಿ ಜಲಮೂಲಗಳ ಮಾಲಿನ್ಯ ಕೈಮೀರಿ ಹೋಗುವ ಮೊದಲೇ ಸರ್ಕಾರ ಸೂಕ್ತ ಕಾನೂನು ರಚಿಸಿ, ಜನರಲ್ಲಿ ಅರಿವು ಮೂಡಿಸಲು ಕಾರ್ಯಪ್ರವೃತ್ತವಾಗಬೇಕು.
–ವಿಶ್ವನಾಥ ರಟ್ಟಿಹಳ್ಳಿ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT