ಕರ್ತವ್ಯನಿಷ್ಠೆಗೆ ಹೆಸರಾಗಿರುವ ಐಎಎಸ್ ಅಧಿಕಾರಿ ಹರ್ಷ ಗುಪ್ತ ಅವರು ಭೂಮಾಪನಾ ಇಲಾಖೆಯ ಆಯುಕ್ತರಾಗಿ ನೇಮಕಗೊಂಡಿರುವುದು ಸಂತಸದ ವಿಚಾರ (ಪ್ರ.ವಾ., ಜೂನ್ 19). ಇದು, ಬಡ ಮತ್ತು ಮಧ್ಯಮ ವರ್ಗದ ರೈತರಿಗೆ ಆಶಾದಾಯಕ ಸಂಗತಿ. ಏಕೆಂದರೆ ಈಗ ಕೆಲವು ಭ್ರಷ್ಟ ಅಧಿಕಾರಿಗಳು ಭೂಮಾಪನ ಕಾರ್ಯದಲ್ಲಿ ಕೃಷಿಕರಿಗೆ ಸರಿಯಾಗಿ ನೆರವಾಗದೆ ಸತಾಯಿಸುತ್ತಿದ್ದಾರೆ. ಇದರಿಂದ, ನೂರಾರು ಸಮಸ್ಯೆಗಳನ್ನು ಹೊತ್ತು ಬರುವ ರೈತರು ತೊಂದರೆಗೆ ಸಿಲುಕುವಂತಾಗಿದೆ. ಹೀಗಾಗಿ, ಪ್ರತಿದಿನ ಸುಖಾಸುಮ್ಮನೆ ತಾಲ್ಲೂಕು ಕಚೇರಿಯ ಅಧಿಕಾರಿಗಳ ಬಳಿಗೆ ಅಲೆಯುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ‘ತಬರನ ಕಥೆ’ಯ ತಬರನಂತಾಗಿದೆ ಜನಸಾಮಾನ್ಯರ ಪರಿಸ್ಥಿತಿ. ಹರ್ಷಗುಪ್ತ ಅವರ ಈ ನೇಮಕವು ಭರವಸೆಯ ಬೆಳಕಿನಂತೆ ನಮಗೆ ಭಾಸವಾಗುತ್ತಿದೆ.