‘ಗಂಡ- ಹೆಂಡತಿ ಕೂಡಿ ಕಷ್ಟಕ್ಕ ಎದಿ ಕೊಡ್ರಿ...’ ಎಂಬ ವಿಶೇಷ ವರದಿಯಲ್ಲಿ (ಪ್ರ.ವಾ., ಜುಲೈ 26) ಕೊಪ್ಪಳ ಜಿಲ್ಲೆಯ ಕವಲೂರಿನ ನಿಂಗವ್ವಜ್ಜಿಯ ಮಾತುಗಳು ಅರ್ಥಪೂರ್ಣವಾಗಿವೆ. ಇವನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಕೌಟುಂಬಿಕ ಹಿಂಸೆಯನ್ನು ತಡೆಯಬಹುದು. ಮನೆಯಲ್ಲಾಗಲೀ, ಸಂಸಾರದಲ್ಲಾಗಲೀ, ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ಸಮಾನ ಮನಸ್ಕರು ಇಲ್ಲದಿದ್ದಾಗ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಅತಿರೇಕದ ವರ್ತನೆಯಿಂದ ಕೌಟುಂಬಿಕ ಹಿಂಸೆಗೆ ಎಡೆಮಾಡಿಕೊಡುತ್ತದೆ.