ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರವು ಕಾಸರಗೋಡು ಜಿಲ್ಲೆಯ ಕೆಲವು ಹಳ್ಳಿಗಳ ಹೆಸರುಗಳನ್ನು ಬದಲಾವಣೆ ಮಾಡಿ ಮಲಯಾಳಂ ಹೆಸರುಗಳನ್ನು ಇಡಲು ತೀರ್ಮಾನಿಸಿರುವುದಾಗಿ ವರದಿಯಾಗಿದೆ. ಇದು ಅತ್ಯಂತ ದುರದೃಷ್ಟಕರ ಬೆಳವಣಿಗೆ. ಯಾವುದೇ ಪ್ರದೇಶಕ್ಕೆ ಮರುನಾಮಕರಣ ಅಥವಾ ಐತಿಹಾಸಿಕ ಹಿನ್ನೆಲೆಗೆ ಧಕ್ಕೆ ಮಾಡುವ ಕಾರ್ಯವನ್ನು ಯಾವುದೇ ಸರ್ಕಾರ ಮಾಡಬಾರದು. ಅದು ಉತ್ತರಪ್ರದೇಶ, ಗುಜರಾತ್, ಕೇರಳ, ಕರ್ನಾಟಕ ಎಲ್ಲಿಯೇ ಆಗಲಿ ಪ್ರತಿಯೊಂದು ಹಳ್ಳಿಯ ಹೆಸರಿಗೂ ಐತಿಹಾಸಿಕ, ಪೌರಾಣಿಕ ಮಹತ್ವ ಮತ್ತು ಕಾರಣಗಳಿರುತ್ತವೆ.