ಹಿಂದೆಯೂ ಇಂದಿರಾ ಗಾಂಧಿಯವರ ಕುರಿತು ಮೆಚ್ಚುಗೆಯ ಮಾತಾಡುತ್ತಿದ್ದ ಹಿರಿಯರು, ಪುತ್ರ ಸಂಜಯ್ ಗಾಂಧಿಯವರ ವರಸೆಗಳಿಗೆ ಬೇಸರಿಸುತ್ತಿದ್ದರು. ಈಗ ರಾಹುಲ್ ಸುತ್ತ ಇರುವ, ರಾಜಕೀಯ ಅರಿಯದ ಅಪ್ರಬುದ್ಧರೇ ಪಕ್ಷದ ಇಂದಿನ ದುಃಸ್ಥಿತಿಗೆ ಕಾರಣ. ಇದನ್ನು ಮನವರಿಕೆ ಮಾಡಿಕೊಡುವಷ್ಟು ಧೈರ್ಯ ಹೊಗಳುಭಟ್ಟಂಗಿಗಳಿಗೆ ಇಲ್ಲ. ಜೊತೆಗೆ, ಭಟ್ಟಂಗಿಗಳಿಗೆ ರಾಹುಲ್ ಅವರೇ ಆಸರೆ.