ದುರದೃಷ್ಟವೆಂದರೆ, ಇಂಥ ವಿಚಾರಗಳ ಬಗ್ಗೆ ಅನವಶ್ಯಕವಾಗಿ ಉದ್ವಿಗ್ನ ವಾತಾವರಣ ಉಂಟಾಗಿ, ಅದು ಜನಸಾಮಾನ್ಯರ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರ ಅಗತ್ಯವಿದೆಯೇ? ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದಂಥ ರಾಷ್ಟ್ರೀಯ ಸಂಭ್ರಮದ ಆಚರಣೆಗಳಲ್ಲಿ ಜನರು ರಾಜಕೀಯಪ್ರೇರಿತ ಭಾವನೆಗಳಿಂದ ದೂರವಿರಬೇಕು. ಸ್ವಾತಂತ್ರ್ಯಾನಂತರದ ನಮ್ಮ ಸಾಧನೆಗಳನ್ನು ಸ್ಮರಿಸಬೇಕು. ಕೊರತೆಗಳನ್ನು ಗುರುತಿಸಬೇಕು ಮತ್ತು ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕು. ಸಮಸ್ಯೆಗಳ ನಿವಾರಣೆಗೆ ಬೇಕಾದಪರಿಹಾರೋಪಾಯಗಳ ಬಗ್ಗೆ ಗಮನಹರಿಸುವ ಕಡೆ ನಮ್ಮ ಚರ್ಚೆ, ಚಿಂತನೆಗಳು ಹೊರಳಬೇಕು.
–ಡಾ. ಜಿ.ಬೈರೇಗೌಡ,ಬೆಂಗಳೂರು