ಬಿಜೆಪಿ ವಕ್ತಾರರಾಗಿದ್ದ ನೂಪುರ್ ಶರ್ಮಾ ಅವರನ್ನು ವಿವಾದಿತ ಹೇಳಿಕೆ ಬಗೆಗಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವುದು, ಹೇಳಿಕೆ ವೀರರಲ್ಲಿ ನಡುಕ ಹುಟ್ಟಿಸಿದೆ. ಇತ್ತೀಚಿನ ದಿನಗಳಲ್ಲಿ ಮಾತನಾಡಲು ವೇದಿಕೆ ಮತ್ತು ಮೈಕ್ ದೊರಕಿದರೆ ಸಾಕು, ಕೆಲವರಿಗೆ ನಿಯಂತ್ರಣ ಎನ್ನುವ ಶಬ್ದವೇ ಮರೆತು ಹೋಗುತ್ತದೆ. ದೃಶ್ಯ ಮಾಧ್ಯಮದವರು ಮುಂದೆ ಇದ್ದರಂತೂ ಇದು ಇನ್ನೂ ಹೆಚ್ಚು. ಹಾಗೆಯೇ, ಅಸಭ್ಯ, ಅನಾಗರಿಕ ಮಾತುಗಳೂ ಅಡೆತಡೆ ಇಲ್ಲದೆ ಹರಿಯುತ್ತವೆ.