ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಳಿಕೆ ವೀರರಿಗೆ ಚಾಟಿ ಏಟು

ಅಕ್ಷರ ಗಾತ್ರ

ಬಿಜೆಪಿ ವಕ್ತಾರರಾಗಿದ್ದ ನೂಪುರ್‌ ಶರ್ಮಾ ಅವರನ್ನು ವಿವಾದಿತ ಹೇಳಿಕೆ ಬಗೆಗಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವುದು, ಹೇಳಿಕೆ ವೀರರಲ್ಲಿ ನಡುಕ ಹುಟ್ಟಿಸಿದೆ. ಇತ್ತೀಚಿನ ದಿನಗಳಲ್ಲಿ ಮಾತನಾಡಲು ವೇದಿಕೆ ಮತ್ತು ಮೈಕ್‌ ದೊರಕಿದರೆ ಸಾಕು, ಕೆಲವರಿಗೆ ನಿಯಂತ್ರಣ ಎನ್ನುವ ಶಬ್ದವೇ ಮರೆತು ಹೋಗುತ್ತದೆ. ದೃಶ್ಯ ಮಾಧ್ಯಮದವರು ಮುಂದೆ ಇದ್ದರಂತೂ ಇದು ಇನ್ನೂ ಹೆಚ್ಚು. ಹಾಗೆಯೇ, ಅಸಭ್ಯ, ಅನಾಗರಿಕ ಮಾತುಗಳೂ ಅಡೆತಡೆ ಇಲ್ಲದೆ ಹರಿಯುತ್ತವೆ.

ಇಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಪಕ್ಷ ರಾಜಕಾರಣ ಅಡ್ಡ ಬರುತ್ತಿದೆ. ಕರ್ನಾಟಕದಲ್ಲೂ ಇಂಥವರ ಸಂಖ್ಯೆ ಕಡಿಮೆಯೇನಲ್ಲ. ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ವ್ಯಕ್ತವಾದ ನ್ಯಾಯಮೂರ್ತಿಯ ಆಕ್ರೋಶವು ಸರ್ಕಾರದ ಕಣ್ಣು ತೆರೆಸಬೇಕು.

– ರಮಾನಂದ ಶರ್ಮಾ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT