ಸ್ವಾಮಿ ವೈದ್ಯರೇ...! ತನಗೆ ಬಂದಿರುವುದು ಯಾವ ರೋಗ ಎಂಬುದು ಎಷ್ಟೋ ಬಾರಿ ರೋಗಿಗೇ ತಿಳಿದಿರುವುದಿಲ್ಲ. ಹಲವು ಬಾರಿ, ಹೇಳಿಕೊಂಡರೂ ವೈದ್ಯನ ಕಿವಿಗೆ ತಟ್ಟಿರುವುದಿಲ್ಲ. ಅನಾಹುತ ಸಂಭವಿಸುವ ಮೊದಲೇ ರೋಗಿಯ ರೋಗವನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುವವನೇ ನಿಜವಾದ ವೈದ್ಯ. ಅದರಲ್ಲೂ ಈ ಕಾಲದಲ್ಲಿ ರೋಗ ಪತ್ತೆ ಮಾಡುವುದಕ್ಕೆ ಅನೇಕ ಯಂತ್ರಗಳಿವೆ...! ಅವೆಲ್ಲವನ್ನೂ ಬಳಸಿಕೊಂಡು ರೋಗ ವಾಸಿ ಮಾಡಿ. ಇಲ್ಲವಾದಲ್ಲಿ, ವಾಸಿ ಮಾಡಬಲ್ಲ ಪಕ್ಕದ ಆಸ್ಪತ್ರೆಗೆ ರೋಗಿ ಹೋಗಿಯೇ ಹೋಗುತ್ತಾನೆ. ಅದಾಗುವುದಕ್ಕೆ ಮೊದಲೇ ಆ ರೋಗಿಗೆ ತಮ್ಮ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಿ ನಿಜವಾದ ವೈದ್ಯರಾಗಿ.
-ಪತ್ತಂಗಿ ಎಸ್. ಮುರಳಿ, ಬೆಂಗಳೂರು