ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರೇ, ರೋಗ ಪತ್ತೆಹಚ್ಚಿ! : ಜೆಡಿಎಸ್ ನಾಯಕ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯೆ

Last Updated 3 ನವೆಂಬರ್ 2019, 19:45 IST
ಅಕ್ಷರ ಗಾತ್ರ

‘ನಮ್ಮದೇ ಪಕ್ಷದ ಶಾಸಕರು ನನ್ನ ವಿರುದ್ಧ ಸಿಟ್ಟು ಮಾಡಿಕೊಂಡಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ. ಚಿಕಿತ್ಸೆ ನೀಡುವುದಕ್ಕೆ ರೋಗ ಏನು ಅಂತ ಬಂದು ಹೇಳಿಕೊಂಡರೆ ತಾನೇ ಗೊತ್ತಾಗುವುದು?’ ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಕಟಕಿಯಾಡಿದ್ದಾರೆ (ಪ್ರ.ವಾ., ನ.3).

ಸ್ವಾಮಿ ವೈದ್ಯರೇ...! ತನಗೆ ಬಂದಿರುವುದು ಯಾವ ರೋಗ ಎಂಬುದು ಎಷ್ಟೋ ಬಾರಿ ರೋಗಿಗೇ ತಿಳಿದಿರುವುದಿಲ್ಲ. ಹಲವು ಬಾರಿ, ಹೇಳಿಕೊಂಡರೂ ವೈದ್ಯನ ಕಿವಿಗೆ ತಟ್ಟಿರುವುದಿಲ್ಲ. ಅನಾಹುತ ಸಂಭವಿಸುವ ಮೊದಲೇ ರೋಗಿಯ ರೋಗವನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುವವನೇ ನಿಜವಾದ ವೈದ್ಯ. ಅದರಲ್ಲೂ ಈ ಕಾಲದಲ್ಲಿ ರೋಗ ಪತ್ತೆ ಮಾಡುವುದಕ್ಕೆ ಅನೇಕ ಯಂತ್ರಗಳಿವೆ...! ಅವೆಲ್ಲವನ್ನೂ ಬಳಸಿಕೊಂಡು ರೋಗ ವಾಸಿ ಮಾಡಿ. ಇಲ್ಲವಾದಲ್ಲಿ, ವಾಸಿ ಮಾಡಬಲ್ಲ ಪಕ್ಕದ ಆಸ್ಪತ್ರೆಗೆ ರೋಗಿ ಹೋಗಿಯೇ ಹೋಗುತ್ತಾನೆ. ಅದಾಗುವುದಕ್ಕೆ ಮೊದಲೇ ಆ ರೋಗಿಗೆ ತಮ್ಮ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಿ ನಿಜವಾದ ವೈದ್ಯರಾಗಿ.
-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT