ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಸುರಕ್ಷತೆಯ ಅರಿವು ಸಂಸ್ಕೃತಿಯಾಗಬೇಕು

ಅಕ್ಷರ ಗಾತ್ರ

ತುಮಕೂರು ಜಿಲ್ಲೆಯ ಗ್ರಾಮವೊಂದರ ಶಾಲೆಯಲ್ಲಿ ಧ್ವಜಸ್ತಂಭ ಅಳವಡಿಸುವಾಗ ವಿದ್ಯುತ್ ಸ್ಪರ್ಶದಿಂದ
ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಅತೀವ ದುಃಖ ತರುವಂಥದ್ದು (ಪ್ರ.ವಾ., ಆ. 16). ಶಿಕ್ಷಣ ಸಚಿವರು ಸಹಜವಾಗಿ ಈ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ತನಿಖೆಯ ನಂತರ ಅಪಘಾತದ ಮೂಲ ಕಾರಣ ಜನರಿಗೆ ತಿಳಿಯುವಂತಾದರೆ ಇಂಥ ಅಪಘಾತಗಳು ಮರುಕಳಿಸದಂತೆ ಮಾಡಬಹುದು. ಶಾಲಾ ಹಂತದಲ್ಲಿಯೇ ಸುರಕ್ಷತೆ ಬಗ್ಗೆ ತಿಳಿವಳಿಕೆ ನೀಡುವುದರಿಂದ ಸುರಕ್ಷತೆ ಎಂಬುದು ಮಕ್ಕಳಲ್ಲಿ ಒಂದು ಸಂಸ್ಕೃತಿಯಾಗಿ ಬೆಳೆಯುತ್ತದೆ.

ಸಣ್ಣ ಸಣ್ಣ ಅಪಘಾತಗಳನ್ನು ತಪ್ಪಿಸಲು ಅಗತ್ಯವಾದ ಕೌಶಲಗಳನ್ನು ಬೆಳೆಸಲು ಸಾಧ್ಯವಾದರೆ, ದೊಡ್ಡ ದೊಡ್ಡ ಅಪಘಾತಗಳನ್ನು ತಡೆಯಬಹುದು ಎಂಬುದು ವೈಜ್ಞಾನಿಕವಾಗಿ ರುಜುವಾತಾಗಿದೆ. ಹೀಗೆ, ಶಾಲಾ ಹಂತದಲ್ಲಿಯೇ ಬೆಳೆಸಿಕೊಂಡ ಸುರಕ್ಷಾ ಸಂಸ್ಕೃತಿಯು ಮುಂದೆ ಉದ್ಯೋಗ ಸ್ಥಳದಲ್ಲಿ ಒಂದು ಮನೋಭಾವವಾಗಿ ಉಳಿಯುತ್ತದೆ. ಈ ದಿಸೆಯಲ್ಲಿ ಪ್ರತೀ ಶಾಲೆಯಲ್ಲಿ ಕನಿಷ್ಠ ಒಬ್ಬ ಶಿಕ್ಷಕರಿಗೆ ಸುರಕ್ಷತಾ ನಿಯಮಗಳ ಬಗ್ಗೆ ತರಬೇತಿ ನೀಡಲು ಸರ್ಕಾರ ಚಿಂತಿಸಬೇಕು.

-ಡಾ. ಜಿ.ಬೈರೇಗೌಡ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT