ಬರಗೂರು ರಾಮಚಂದ್ರಪ್ಪನವರು ‘ಪಠ್ಯಪುಸ್ತಕವು ಪಕ್ಷದ ಪುಸ್ತಕವಲ್ಲ’ ಎಂದಿದ್ದಾರೆ (ಪ್ರ.ವಾ., ನ. 8). ಈಗ ಪ್ರಶ್ನೆ ಇರುವುದು ಪಕ್ಷ ಬಯಸುವ ಪಠ್ಯವನ್ನು ಶಾಲಾ– ಕಾಲೇಜು ಪಠ್ಯದಲ್ಲಿ ಸೇರಿಸಬೇಕು ಎಂಬುದಲ್ಲ. ಟಿಪ್ಪುವಿನ ಪಠ್ಯ ಏಕಮುಖವಾಗಿದೆ ಎನ್ನುವುದು. ಟಿಪ್ಪುವಿನ ಕರಾಳ ಮುಖವಾದ ಮತಾಂತರ, ದೇವಸ್ಥಾನ ಧ್ವಂಸ, ಸಮುದಾಯವೊಂದರ ಸಾಮೂಹಿಕ ಕೊಲೆ, ಮತಾಂಧತೆಯಿಂದ ಜನಸಾಮಾನ್ಯರು ಅನುಭವಿಸಿದ ಕಷ್ಟ ಕೋಟಲೆಗಳನ್ನು ಒಳಗೊಂಡ ಅಂಶವನ್ನು ಕೈಬಿಡಲಾಗಿದೆ ಎನ್ನುವುದು.