ನಮ್ಮ ದೇಶದಲ್ಲಿ ಧ್ವನಿವರ್ಧಕದ ಬಳಕೆ ಒಂದು ವ್ಯಾಧಿಯಾಗಿ ಉಲ್ಬಣಿಸುತ್ತಿದೆ. ಇದರ ದುಷ್ಪರಿಣಾಮಗಳನ್ನು ಯಾರೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ವಿಧಿ ಇಲ್ಲದೆ ಜನ ಈ ಹಿಂಸೆ ಸಹಿಸಿಕೊಂಡು
ಬದುಕುತ್ತಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು, ಪೊಲೀಸರು ಸಹ ಮೂಕರಾಗಿದ್ದಾರೆ. ಇವರು, ಕಾನೂನುಗಳನ್ನು ಜಾರಿಗೊಳಿಸಲಾಗದಷ್ಟು ನಿಸ್ಸಹಾಯಕರಾಗಿದ್ದಾರೆ.