ಈ ಅರಣ್ಯದಲ್ಲೀಗ ಬರೀ ಬಳ್ಳಿಗಳು ಬೇರಿಲ್ಲದೇ ನೇತಾಡುವುದನ್ನು ಕಂಡರೆ ಮನ ಕಲಕುತ್ತದೆ. ಈ ಬೇರುಗಳನ್ನು ತಮಿಳುನಾಡಿನ ಒಬ್ಬ ವ್ಯಾಪಾರಿಗೆ ಪ್ರತಿ ಕೆ.ಜಿಗೆ ₹ 70-100ಕ್ಕೆ ಮಾರಾಟ ಮಾಡಲಾಗಿದೆ. ಸ್ಥಳೀಯರು ತಮ್ಮ ಆದಾಯಕ್ಕಾಗಿ, ಅಳಿವಿನಂಚಿನಲ್ಲಿರುವ ಈ ಬೇರಿನ ಮೇಲೆ ಅವಲಂಬಿತರಾಗಿರುವುದು ಒಂದು ವಿಡಂಬನೆಯೇ ಸರಿ. ಇಲ್ಲಿಯ ಗ್ರಾಮ ಅರಣ್ಯ ಸಮಿತಿಗಳಿಗೆ ತಮ್ಮ ಹಕ್ಕು, ಕರ್ತವ್ಯಗಳ ಕುರಿತು ಮಾಹಿತಿಯ ಕೊರತೆ ಇದೆ. ಹೋದ ವರ್ಷವೇ ಶೇ 80ರಷ್ಟು ಬೇರನ್ನು ತೆಗೆದಿದ್ದಾರೆ. ಈ ವರ್ಷವೂ ಹೀಗೇ ಮುಂದುವರಿದರೆ, ಅಲ್ಲಿಗೆ ಸಾವನದುರ್ಗ ಕಾಡಿನಲ್ಲಿ ಮಾಕಳಿ ಬೇರು ಬರೀ ನೆನಪಾಗಿ ಉಳಿಯುತ್ತದೆ.