ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಘೋರ ಅಪರಾಧ: ಕ್ಷಮೆಗೆ ಅರ್ಹವಲ್ಲ

Last Updated 15 ನವೆಂಬರ್ 2020, 21:50 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಮೂವರು ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆ ಮಾಡಿಕೊಂಡ (ಪ್ರ.ವಾ., ನ. 14), ಚಿತ್ರದುರ್ಗದಲ್ಲಿ ಮಹಿಳೆಯೊಬ್ಬರು ತಮ್ಮ ಮೂವರು ಮಕ್ಕಳೊಂದಿಗೆ ಹಾರಂಗಿ ನಾಲೆಗೆ ಹಾರಿದ (ಪ್ರ.ವಾ., ನ.15) ಸುದ್ದಿ ಗಳನ್ನು ಓದಿದರೆ ಎಂಥ ಕಲ್ಲು ಹೃದಯದವರಿಗೂ ಸಂಕಟವಾಗದಿರದು. ಈ ಎರಡೂ ಪ್ರಕರಣಗಳಲ್ಲಿ ತಂದೆ ಮತ್ತು ತಾಯಿ ಇನ್ನೂ ಮನಸ್ಸು ಪಕ್ವವಾಗದವರು. ಇಂತಹ ಕೃತ್ಯಕ್ಕೆ ಮುಂದಾಗುವವರು ಮಕ್ಕಳನ್ನು ಕೊಂದು ಅವು ಅನಾಥರಾಗುವುದನ್ನು ತಪ್ಪಿಸುವುದಕ್ಕಿಂತ, ಮಕ್ಕಳಿಗಾಗಿ ತಮ್ಮ ಕಷ್ಟಗಳನ್ನು ಅನುಭವಿಸಿ, ತಾವು ಉಳಿದುಕೊಂಡು, ಮಕ್ಕಳು ಅನಾಥರಾಗುವುದನ್ನು ತಪ್ಪಿಸುವ ಯೋಚನೆಯನ್ನು ಮಾಡಬೇಕು. ಮಕ್ಕಳ ಆಟ-ಪಾಠ ನೋಡಿಕೊಂಡು ತಮ್ಮ ನೋವು ಮರೆಯುವ ಎಲ್ಲಾ ಸಾಧ್ಯತೆಗಳಿರುವಾಗ, ಅವರನ್ನು ಕೊಲ್ಲುವಂಥ ಕೆಲಸಕ್ಕೆ ಇಳಿಯುವ ತಂದೆ-ತಾಯಿಯ ಅಪರಾಧ ಕ್ಷಮೆಗೆ ಅರ್ಹವಲ್ಲ. ಮಕ್ಕಳು ಸಮಾಜದ ಆಸ್ತಿ. ಅವರನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ.

-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT