ಪ್ರಸ್ತುತ ಗ್ರಾಮೀಣ ಭಾಗದ ಅನೇಕ ಚಿಕಿತ್ಸಾಲಯಗಳಲ್ಲಿ ಪಶುವ್ಯೆದ್ಯರೇ ಬಾಗಿಲು ತೆಗೆದು, ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಹೈನೋದ್ಯಮ ಉಚ್ಛ್ರಾಯ ಸ್ಥಿತಿಯಲ್ಲಿರುವ ದಕ್ಷಿಣ ಕರ್ನಾಟಕ ಭಾಗದ ಜನಪ್ರತಿನಿಧಿಯು ಇಲಾಖೆಯ ಸಚಿವರಾದರೆ, ಅವರಿಗೆ ಹೈನೋದ್ಯಮದ ಬಗ್ಗೆ ಒಳನೋಟ ಇರುತ್ತದೆ. ಆ ಕಾರಣದಿಂದ ಅಂತಹವರಿಂದ ಇಲಾಖೆಯ ಸುಧಾರಣೆ ನಿರೀಕ್ಷಿಸಬಹುದು. ಹಿಂದೆ, ದಿವಂಗತ ನಾಗೇಗೌಡರು ಪಶುಸಂಗೋಪನಾ ಸಚಿವರಾಗಿ ಜಿಲ್ಲಾ ಕೇಂದ್ರಗಳಲ್ಲಿ ಪಾಲಿ ಕ್ಲಿನಿಕ್ಗಳ ಪ್ರಾರಂಭದಂತಹ ಹಲವಾರು ನೂತನ ಕಾರ್ಯಕ್ರಮಗಳನ್ನು ಕೈಗೊಂಡು, ಇಲಾಖೆಗೆ ಹೆಚ್ಚಿನ ಮಹತ್ವ ಸಿಗುವ ರೀತಿ ಕಾರ್ಯನಿರ್ವಹಿಸಿದ್ದನ್ನು ಸ್ಮರಿಸಬಹುದು.
-ಡಾ. ಟಿ.ಜಯರಾಂ, ಕೋಲಾರ