ಇತ್ತ ಕಲ್ಯಾಣ ಕರ್ನಾಟಕದಲ್ಲಿ ಅದೇ ಖಾಲಿ ಹುದ್ದೆಗಳು, ಬಾಕಿ ಉಳಿಯುವ ಸರ್ಕಾರಿ ಕಾರ್ಯಗಳು. ಅಲ್ಲಿಗೆ ಮತ್ತೊಂದು ವಿಫಲ ಯೋಜನೆ. ಮೀಸಲಾತಿಯಡಿಯಲ್ಲಿ ನಡೆದ ನೇಮಕಾತಿ, ಬಡ್ತಿ ದಾಖಲೆಗಳನ್ನು ಪರಿಶೀಲಿಸಿದರೆ ಎಲ್ಲವೂ ತಿಳಿಯುತ್ತದೆ. ಆದರೆ ಅದನ್ನು ಯಾರೂ ಸರಿ ಮಾಡುವುದಿಲ್ಲ. ಮತ್ತೆ ಅದೇ ಗೋಳು: ಕಲ್ಯಾಣ ಕರ್ನಾಟಕ ಹಿಂದುಳಿದಿದೆ.
-ಮಂಜುನಾಥ ಎಸ್., ಬೆಂಗಳೂರು