‘ವಿಧಾನಸಭೆ ಚುನಾವಣೆ ಗೆಲ್ಲಲು ಕೇವಲ ಮೋದಿ ಅಲೆಯೊಂದೇ ಸಾಲದು’ ಎಂಬ ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆ (ಪ್ರ.ವಾ., ಸೆ. 20), ಪಕ್ಷದ ಆಂತರಿಕ ವಿಚಾರವನ್ನು ಪರಿಗಣಿಸಿ ಹೇಳುವುದಾದರೆ ಅತ್ಯಂತ ಧೈರ್ಯದ ಮಾತು. ಅವರ ಅಭಿಪ್ರಾಯವು ಕಟುಸತ್ಯವನ್ನು ವಿವರಿಸುವ ಮೂಲಕ ಚರ್ಚೆಗೆ ಗ್ರಾಸ ಒದಗಿಸಿದೆ. ಅಷ್ಟೇ ಅಲ್ಲ, ಮುಖ್ಯಮಂತ್ರಿ ಕುರ್ಚಿಯಿಂದ ಇಳಿದ ನಂತರದ ಯಡಿಯೂರಪ್ಪ ಅವರ ಈ ಹೇಳಿಕೆ ಮಹತ್ವ ಪಡೆದಿದೆ.