ಕಲ್ಯಾಣ ಕರ್ನಾಟಕ ಹಿಂದುಳಿದಿರುವ ಬಗ್ಗೆ ಮಂಜುನಾಥ್ ಎಸ್. ಅವರು ಎತ್ತಿರುವ ಪ್ರಶ್ನೆಗಳು (ವಾ.ವಾ.,
ಸೆ. 20) ಸಮಂಜಸವಾಗಿವೆ. ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಯಾವುದೇ ಹಿಂದುಳಿದ ಪ್ರದೇಶವನ್ನು
ಅಭಿವೃದ್ಧಿಪಡಿಸುವುದು ಕಷ್ಟದ ಕೆಲಸವೇನೂ ಅಲ್ಲ. ಆದರೆ ಅದಕ್ಕೆ ಬೇಕಾಗಿರುವುದು ಅವರನ್ನು ಆಯ್ಕೆ ಮಾಡಿ ಕಳುಹಿಸಿದ ಜನರ ಹಾಗೂ ನೆಲದ ಋಣ ತೀರಿಸುವ ಮನೋಭಾವ, ಅಭಿವೃದ್ಧಿಪಡಿಸಲೇಬೇಕೆನ್ನುವ ಛಲ.