ಕಲ್ಯಾಣ ಕರ್ನಾಟಕ ಹಿಂದುಳಿದಿರುವ ಬಗ್ಗೆ ಮಂಜುನಾಥ್ ಎಸ್. ಅವರು ಎತ್ತಿರುವ ಪ್ರಶ್ನೆಗಳು (ವಾ.ವಾ.,
ಸೆ. 20) ಸಮಂಜಸವಾಗಿವೆ. ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಯಾವುದೇ ಹಿಂದುಳಿದ ಪ್ರದೇಶವನ್ನು
ಅಭಿವೃದ್ಧಿಪಡಿಸುವುದು ಕಷ್ಟದ ಕೆಲಸವೇನೂ ಅಲ್ಲ. ಆದರೆ ಅದಕ್ಕೆ ಬೇಕಾಗಿರುವುದು ಅವರನ್ನು ಆಯ್ಕೆ ಮಾಡಿ ಕಳುಹಿಸಿದ ಜನರ ಹಾಗೂ ನೆಲದ ಋಣ ತೀರಿಸುವ ಮನೋಭಾವ, ಅಭಿವೃದ್ಧಿಪಡಿಸಲೇಬೇಕೆನ್ನುವ ಛಲ.
ಇದ್ಯಾವುದರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದೆ ಸ್ವಯಂ ಅಭಿವೃದ್ಧಿ ಮಾಡಿಕೊಂಡು ಕಾಲ ತಳ್ಳುತ್ತಿರುವ
ಜನಪ್ರತಿನಿಧಿಗಳಿಗೆ ಜನರೇ ಸರಿಯಾದ ಪಾಠ ಕಲಿಸುವುದು ಅನಿವಾರ್ಯವಾಗಿದೆ.
-ಕೆ.ಪ್ರಭಾಕರ,ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.