ಈ ಕುರಿತು ವಿಧಾನಸಭೆಯಲ್ಲಿ ಈಗ ಚರ್ಚೆ ನಡೆದು, ವೈಜ್ಞಾನಿಕ ವೇಗನಿಯಂತ್ರಕ ರಸ್ತೆಯುಬ್ಬುಗಳನ್ನು ನಿರ್ಮಿಸಲು ಕ್ರಮ ಜರುಗಿಸುವುದಾಗಿ ಲೋಕೋಪಯೋಗಿ ಸಚಿವರು ತಿಳಿಸಿದ್ದಾರೆ. ಇದು ಸ್ವಾಗತಾರ್ಹ. ರಾಜ್ಯದ ಎಲ್ಲ ಹೆದ್ದಾರಿ, ಜಿಲ್ಲಾ ಮುಖ್ಯರಸ್ತೆ, ಎಲ್ಲ ನಗರಗಳ ರಸ್ತೆಗಳಲ್ಲಿ ಈಗಿರುವ ವೇಗನಿಯಂತ್ರಕಗಳನ್ನು ಬದಲಾವಣೆ ಮಾಡಿ, ವೈಜ್ಞಾನಿಕ ವೇಗತಡೆ ನಿಯಂತ್ರಕಗಳನ್ನು ತ್ವರಿತವಾಗಿ ನಿರ್ಮಿಸಬೇಕು. ವಾಹನ ಚಾಲಕರು, ಪ್ರಯಾಣಿಕರು ನಿರಾತಂಕವಾಗಿ ಸಂಚರಿಸಲು ಅನುಕೂಲ ಮಾಡಿಕೊಡಬೇಕು.
-ಬಸವರಾಜ ಹುಡೇದಗಡ್ಡಿ, ಬೆಂಗಳೂರು