ಎಪ್ಪತ್ತು ವರ್ಷ ದಾಟಿದವರನ್ನು ಅಧಿಕಾರಕ್ಕೆ ಪರಿಗಣಿಸಬಾರದು, ಅದರ ಗಡಿಯಲ್ಲಿ ಇರುವವರು ಆ ವಯಸ್ಸು ತಲುಪಿದಾಗ ನಿವೃತ್ತಿ ಮಾರ್ಗ ತೋರಿಸಬೇಕು ಎಂಬ ಧೋರಣೆಯನ್ನು ಎಲ್ಲರಿಗೂ ಅನ್ವಯಿಸುವುದಾದರೆ, ಪ್ರಧಾನಿ ತಮ್ಮ 2024ರ ನಂತರದ ಯೋಜನೆಯನ್ನು ಈಗ ಹೇಳಬಹುದಿತ್ತು. ಒಬ್ಬ ವ್ಯಕ್ತಿಗೆ ಹತ್ತಕ್ಕೂ ಹೆಚ್ಚು ವರ್ಷ ರಾಜ್ಯ ಹಾಗೂ ಹತ್ತು ವರ್ಷ ದೇಶದ ಚುಕ್ಕಾಣಿ ಹಿಡಿಯಲು ಅವಕಾಶ ಸಿಗುವುದು ಸಾಕಲ್ಲವೇ? ಪಕ್ಷ ಹಾಗೂ ಸಂಘ ಪರಿವಾರ ಈ ಬಗೆಗೆ ಯೋಚಿಸಲು ಇದು ಸಕಾಲ.
-ಎಚ್.ಎಸ್.ಮಂಜುನಾಥ, ಬೆಂಗಳೂರು