ಕಾನೂನು ಪದವಿ ಅಧ್ಯಯನವನ್ನು ಕನ್ನಡ ಮಾಧ್ಯಮದಲ್ಲಿ ಆರಂಭಿಸುವುದಕ್ಕೆ ಪೂರಕವಾಗಿ ಸರ್ಕಾರವು ತುರ್ತಾಗಿ ಮಸೂದೆಯನ್ನು ಮಂಡಿಸಿ, ಹಿರಿಯ ಕಾನೂನು ತಜ್ಞರು ಮತ್ತು ನ್ಯಾಯಾಧೀಶರ ಅಭಿಪ್ರಾಯಗಳನ್ನು ಸಂಗ್ರಹಿಸಬೇಕು. ರಾಜ್ಯದಲ್ಲಿರುವ ಕಾನೂನು ವಿಶ್ವವಿದ್ಯಾಲಯವೇ ಇದರ ನೇತೃತ್ವ ವಹಿಸಿಕೊಳ್ಳಬೇಕು. ಹೀಗಾದಾಗ ಮಾತ್ರ ಕಾನೂನು ಶಿಕ್ಷಣ ಮತ್ತು ನ್ಯಾಯಾಲಯಗಳು ಗ್ರಾಮೀಣ ಮಟ್ಟದವರೆಗೂ ನಿಲುಕುವಂತಾಗುತ್ತದೆ. ವಿದ್ವಾಂಸರ ವಲಯದಲ್ಲಿ ಈ ಕುರಿತು ಹೆಚ್ಚೆಚ್ಚು ಚರ್ಚೆ ನಡೆಯಲಿ.
-ಡಾ. ಆನಂದಕುಮಾರ ಜಕ್ಕಣ್ಣವರ, ಕಾಗವಾಡ