ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ಎರಡು ದಶಕಗಳಿಂದ ಈಚೆಗೆ ಕೆಟ್ಟ ಕಾರಣಗಳಿಗಾಗಿ ಸುದ್ದಿಯಾದದ್ದೇ ಹೆಚ್ಚು. ಇದರ ಹೊಣೆಯನ್ನು ಅಧಿಕಾರಸ್ಥರಾಜಕಾರಣಿಗಳು ಮತ್ತು ಆಯೋಗದ ಆಡಳಿತ ನಿರ್ವಹಣೆಯ ಹೊಣೆ ಹೊತ್ತವರೇ ಹೊರಬೇಕಾಗಿದೆ. ಇವರೊಂದಿಗೆ ಮಧ್ಯವರ್ತಿಗಳು ಸೇರಿ ಸಂಸ್ಥೆಯ ಹೆಸರಿಗೆ ಮಸಿ ಬಳಿದಿದ್ದಾರೆ. ಈ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ನ್ಯಾಯಾಲಯಗಳಿಂದ ಹಲವಾರು ಸಲ ಕಟುಮಾತುಗಳು ಕೇಳಿಬಂದಿದ್ದರೂ ಅದರಿಂದ ಯಾವುದೇ ಸಕಾರಾತ್ಮಕ ಪರಿಣಾಮ ಆಗದಿರುವುದು ದುರದೃಷ್ಟಕರ.
ಕೆಪಿಎಸ್ಸಿಯಿಂದ ನಡೆಯುವ ನೇಮಕಾತಿಗಳಲ್ಲಿ ಪಾರದರ್ಶಕತೆ ತರಲು ಸಾಧ್ಯವಾಗದಿದ್ದರೆ, ಅದು ಇದ್ದು ಪ್ರಯೋಜನವಾದರೂ ಏನು? ನೇಮಕಾತಿಗಳು ಈಗಿನ ರೀತಿಯಲ್ಲೇ ನಡೆಯುವುದಾದರೆ, ಅದಕ್ಕಿಂತಹುದ್ದೆಗಳನ್ನು ಬಹಿರಂಗವಾಗಿ ಹರಾಜು ಹಾಕಿ ಭರ್ತಿ ಮಾಡಿಕೊಳ್ಳುವುದೇ ಲೇಸು.