ಪುರಾತತ್ವ ಇಲಾಖೆಯವರು ಹಂಪಿಯ ಸ್ಮಾರಕಗಳ ಸುತ್ತ ಕಾಂಕ್ರೀಟ್ ಕಾಂಪೌಂಡುಗಳನ್ನು ಎಬ್ಬಿಸುತ್ತಿರುವುದು ನೋಡಿ ನನಗೆ ಗಾಬರಿಯಾಗಿದೆ. ಅವು ರಕ್ಷಣಾ ಗೋಡೆಗಳಲ್ಲ, ಸ್ಮಾರಕಗಳಿಗೆ ಕಟ್ಟುತ್ತಿರುವ ಸಮಾಧಿಗಳು! ಅಷ್ಟೇ ಅಲ್ಲ, ಕೃಷ್ಣ ದೇವಾಲಯದ ಹಿಂಭಾಗದಲ್ಲಿ ಹಾಗೂ ಬ್ಯಾಟರಿಚಾಲಿತ ವಾಹನ ನಿಲ್ದಾಣದ ಬಳಿಯಲ್ಲಿಯೂ ಆಧುನಿಕ ಕಾಂಕ್ರೀಟ್ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಅದರಲ್ಲಿ ಯಾವ ಉದ್ದೇಶವಿದೆಯೋ ಕಾಣೆ. ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸುವ ‘ಘನ ಉದ್ದೇಶ’ ಇರಬಹುದು! ಕೋಟೆಯ ಗೋಡೆಗಳಿಗಿಂತ ದಪ್ಪವಾಗಿರುವ ಕಾಂಕ್ರೀಟ್ ಕಾಂಪೌಂಡ್ಗಳನ್ನು, ಕಟ್ಟಡಗಳನ್ನು ಕಟ್ಟಿಸುತ್ತಿರುವುದು ಅತ್ಯಂತ ಅವೈಜ್ಞಾನಿಕ ಎಂಬುದು ಜನಸಾಮಾನ್ಯರಿಗೂ ತಿಳಿಯುತ್ತದೆ. ಇಲಾಖೆಗೆ ತಿಳಿಯುತ್ತಿಲ್ಲವೇ?