ಅವಧೂತ (ಯೋಗಿ) ಎಂದು ಕರೆಸಿಕೊಳ್ಳುವ ವ್ಯಕ್ತಿಯು ಸಮಾಜಕ್ಕೆ ಮಾರಕವಾಗುವ ಯಾವುದೇ ಧಾರ್ಮಿಕ ನಂಬಿಕೆ, ಆಚರಣೆ, ಸಾಮಾಜಿಕ ಹಾಗೂ ರಾಜಕೀಯ ನಿಲುವುಗಳನ್ನು ಪೂರ್ವಗ್ರಹಪೀಡಿತರಾಗದೆ ನೇರವಾಗಿ, ದಿಟ್ಟತನದಿಂದ ವಿರೋಧಿಸುವ ಛಾತಿ ಹೊಂದಿರಬೇಕು. ಈ ನಿಟ್ಟಿನಲ್ಲಿ ಓಶೋ ರಜನೀಶ್ ಕಟುವಾಗಿ ಮಾತನಾಡಿದ ಸ್ಥೈರ್ಯವಂತ ಮಿಸ್ಟಿಕ್ ಆಗಿದ್ದರು ಎನ್ನಬಹುದು.