ಈ ಚಿಂತನೆ ಅರ್ಥಪೂರ್ಣವಾಗಿದೆ. ಆದರೆ ನಮ್ಮ ಇನ್ನಿತರ ಹಲವು ಯೋಜನೆಗಳಂತೆ ಕಾಟಾಚಾರದ ಕೆಲಸ ಆಗಬಾರದು. ಆಕರ್ಷಕ ಹೆಸರುಗಳೊಂದಿಗೆ ಹಲವಾರು ಯೋಜನೆಗಳು ಘೋಷಣೆ ಆಗುತ್ತವೆ. ಶುರುವಿನಲ್ಲಿ, ಅದರಿಂದ ಪ್ರಯೋಜನ ಆಗಬಹುದು ಎಂಬ ಭರವಸೆಯೂ ಮೂಡುತ್ತದೆ. ಆದರೆ ಅನುಷ್ಠಾನದಲ್ಲಿನ ವೈಫಲ್ಯವು ಭ್ರಮನಿರಸನಗೊಳ್ಳುವಂತೆ ಮಾಡುತ್ತದೆ.