ಪಾಲಕರು ಈ ಸಂಸ್ಥೆಗಳತ್ತ ಏಕೆ ಧಾವಿಸುತ್ತಿದ್ದಾರೆ ಎಂಬುದನ್ನು ತಿಳಿಯಬೇಕು. ಸಮ್ಮೇಳನದಲ್ಲಿ ನಡೆದ ‘ಕನ್ನಡ ಶಾಲೆಗಳ ಅಳಿವು– ಉಳಿವು’ ವಿಷಯ ಕುರಿತ ಗೋಷ್ಠಿಯಲ್ಲಿ, ಗೋಷ್ಠಿಯ ಅಧ್ಯಕ್ಷರು ಮಂಡಿಸಿದ ಅಂಕಿ ಅಂಶಗಳ ಪ್ರಕಾರ, ಸರ್ಕಾರಿ ಶಾಲೆಗಳಲ್ಲಿ ಶೇ 25ರಷ್ಟು ಶಿಕ್ಷಕರು ಅನಧಿಕೃತವಾಗಿ ಗೈರುಹಾಜರಾಗಿರುತ್ತಾರೆ.ಶಾಲೆಗೆ ಬಂದ ಶಿಕ್ಷಕರಲ್ಲಿ ಶೇ 56ರಷ್ಟು ಶಿಕ್ಷಕರು ಪಾಠ ಮಾಡುವುದಿಲ್ಲ. ಸರ್ಕಾರಕ್ಕೆ ಈ ವ್ಯವಸ್ಥೆಯನ್ನು ಸರಿಪಡಿಸಲು ಆಗುತ್ತಿಲ್ಲ. ಅಂದಮೇಲೆ ರಾಷ್ಟ್ರೀಕರಣದ ಮೂಲಕ ಸಾಧಿಸುವುದಾದರೂ ಏನನ್ನು?