ಮೇಲ್ವರ್ಗದವರು ಎಂದು ಕರೆಸಿಕೊಳ್ಳುವ ಬ್ರಾಹ್ಮಣ, ವೈಶ್ಯ, ಠಾಕೂರ್, ಭೂಮಿಹಾರ ಮುಂತಾದ ಜಾತಿಗಳಲ್ಲೂ ಬಡವರಿದ್ದಾರೆ. ಅವರ ಬದುಕನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಈ ನಿರ್ಧಾರ ತುಂಬ ಮಹತ್ವದ್ದು. ಬಿಜೆಪಿ ಅಲ್ಲದೇ ಇನ್ನೂ ಕೆಲವು ರಾಜಕೀಯ ಪಕ್ಷಗಳು ಈ ಹಿಂದೆಯೇ ಮೇಲ್ವರ್ಗದ ಬಡವರಿಗೂ ಮೀಸಲಾತಿ ನೀಡಬೇಕು ಎಂಬ ನಿಲುವನ್ನು ಪ್ರಕಟಿಸಿರುವುದರಿಂದ, ಒಟ್ಟಾರೆ ಮೀಸಲಾತಿ ಪ್ರಮಾಣವನ್ನು ಶೇ 60ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡಲು ಸಮಸ್ಯೆಯಾಗಲಾರದು.