ಆದಾಯ ತೆರಿಗೆ ಇಲಾಖೆಯವರ ಶೋಧ ಕಾರ್ಯದ ವಿರುದ್ಧ ರಾಜ್ಯದ ಮುಖ್ಯಮಂತ್ರಿ ಧರಣಿ ಕೂರುತ್ತಾರೆ ಎಂದರೆ ಅದಕ್ಕಿಂತ ದೊಡ್ಡ ವಿಪರ್ಯಾಸ ಇನ್ನೊಂದಿಲ್ಲ. ತೆರಿಗೆ ವಂಚನೆ ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ.
ದೇಶದ ಕಾನೂನಿಗೆ ಬೆಲೆ ಕೊಡಲು ಇವರಿಗೆ ತಿಳಿದಿಲ್ಲವೇ? ಪಕ್ಷಾತೀತವಾಗಿ ಯಾರೇ ತಪ್ಪು ಮಾಡಿದರೂ ಅದು ತಪ್ಪೇ. ಮುಖ್ಯಮಂತ್ರಿಯ ನಡೆಯನ್ನು ಯಾವ ಬುದ್ಧಿಜೀವಿ ಕೂಡ ವಿರೋಧಿಸದಿದ್ದುದು ವಿಪರ್ಯಾಸ.