ತಾವು ಹಲ್ಲೆ ನಡೆಸಿದ ಸ್ಥಳವು ಅರಣ್ಯ ಇಲಾಖೆಗೆ ಸೇರಿದ್ದಲ್ಲ ತಮ್ಮದು ಎಂದಾದರೆ, ಅದನ್ನು ಸಾಬೀತುಪಡಿಸಲು ಶಾಸಕರ ಸಹೋದರ ಕಾನೂನಿನ ಮೊರೆ ಹೋಗಬಹುದು. ಅದು ಬಿಟ್ಟು ಕರ್ತವ್ಯನಿರತ ಅಧಿಕಾರಿಯ ಮೇಲೆ ದೌರ್ಜನ್ಯ ನಡೆಸಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಿದೆ. ಈ ಘಟನೆಯ ವಿರುದ್ಧ ಬರೀ ಅರಣ್ಯ ಇಲಾಖೆ ಸಿಬ್ಬಂದಿ ಪ್ರತಿಭಟಿಸಿದರೆ ಸಾಲದು. ಇಡೀ ದೇಶದ ಜನ ಇದನ್ನು ಖಂಡಿಸಬೇಕು. ಮಹಿಳೆಯರು ನಿರುಮ್ಮಳರಾಗಿ ಆಯಾ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವಂತೆ ಮಾಡುವ ಹೊಣೆ ಎಲ್ಲಾ ಪ್ರಜ್ಞಾವಂತರದು.