ಕಾಂಗ್ರೆಸ್ ಮುಖಂಡ, ಶಾಸಕ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿರು ವುದರ ವಿರುದ್ಧ ರಾಜ್ಯದ ಹಲವೆಡೆ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಸಾರ್ವಜನಿಕ ವಾಹನಕ್ಕೆ ಬೆಂಕಿ ಹಚ್ಚುವುದೂ ಸೇರಿದಂತೆ ಆಸ್ತಿಗಳಿಗೆ ಹಾನಿಯಾಗುವಂತೆ ಮಾಡುತ್ತಿದ್ದಾರೆ. ಇಂತಹ ನಡೆ, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎನ್ನುವಂತೆ ಇದೆ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ನ್ಯಾಯಾಲಯದಲ್ಲಿ ಕಾನೂನುಬದ್ಧವಾಗಿ ಹೋರಾಡುವ ಹಕ್ಕು ಇದ್ದೇ ಇದೆ. ತಮ್ಮ ತಪ್ಪಿಲ್ಲ ಎಂದು ಮನವರಿಕೆಯಾದಲ್ಲಿ ಶಿವಕುಮಾರ್ ಅವರು ಅದನ್ನು ಸಾಬೀತುಪಡಿಸಿ ನ್ಯಾಯಾಲಯದಿಂದ ತಲೆಯೆತ್ತಿಕೊಂಡು ಹೊರಬರಬಹುದು. ಕಾನೂನು ಎಲ್ಲರಿಗೂ ಒಂದೇ ಎಂಬುದಕ್ಕೆ ಇಂತಹ ಮುಖಂಡರೇ ಮಾದರಿಯಾಗಿ ನಿಲ್ಲಬೇಕು.