ಕೊರೊನಾದ ಪ್ರಮುಖ ಪರಿಣಾಮ ಎಂದರೆ, ಮಾರುಕಟ್ಟೆಯಲ್ಲಿ ಎಲ್ಲಾ ವಸ್ತುಗಳ ಬೆಲೆ ಒಂದಕ್ಕೆ ಎರಡರಷ್ಟು ಜಾಸ್ತಿಯಾಗಿರುವುದು. ಕ್ಷೌರಕ್ಕೆ ಹೋದರೆ ₹ 70 ಕೊಡುತ್ತಿದ್ದ ಜಾಗದಲ್ಲಿ ₹ 90 ಕೊಡಬೇಕಾಗಿದೆ.
ಕೇಳಿದರೆ ‘ಕೊರೊನಾ ಸರ್. ಮೂರು ತಿಂಗಳು ಸೋತುಹೋಗಿದ್ದೇವೆ’ ಎನ್ನುತ್ತಾರೆ. ತರಕಾರಿ, ಚಿಕನ್ ಎಲ್ಲದರ ಬೆಲೆಯೂ ಜಾಸ್ತಿ. ಆದರೆ ಅವರಂತೆಯೇ ನಾವೂ ಇಷ್ಟು ದಿನ ಸಂಬಳ– ಸಾರಿಗೆ ಇಲ್ಲದೆ ಒದ್ದಾಡಿದವರೇ ಎಂದು ಅವರೇಕೆ ತಿಳಿಯುವುದಿಲ್ಲ.
ಕಿಲೊಗೆ ₹ 110 ಇದ್ದ ಚಿಕನ್ ಬೆಲೆ ಈಗ ₹ 170ಕ್ಕೆ ಏರಿದೆ. ಅಂದರೆ ಒಂದೇ ಬಾರಿಗೆ 3 ತಿಂಗಳ ಅರಿಯರ್ಸ್, ಅಂದರೆ ಸರ್ಕಾರವು ನೌಕರರಿಗೆ ಕೊಡುವ ತುಟ್ಟಿಭತ್ಯೆಯಂತೆ ಆಯಿತಲ್ಲ. ಈ ರೀತಿಯ ಹಗಲು ದರೋಡೆ ಸರಿಯೇ?