ಆತ್ಮಹತ್ಯೆ ಮಹಾಪಾಪ ಎಂದು ಬೋಧಿಸಿ ಜನರಿಗೆ ಸೂಕ್ತ ಮಾರ್ಗವನ್ನು ತೋರಿಸಬೇಕಾದ ಸ್ವಾಮಿಗಳೇ ಈ ಮಾರ್ಗ ಹಿಡಿದರೆ ಜನ ಯಾರನ್ನು ನಂಬಬೇಕು? ಸರ್ವಸಂಗ ಪರಿತ್ಯಾಗಿಗಳಾಗಬೇಕಾದ ಸ್ವಾಮಿಗಳು ಒಂದು ಪೀಠದ ಅಧ್ಯಕ್ಷ ಸ್ಥಾನಕ್ಕೆ ಮುಗಿಬಿದ್ದರೆ ಇವರು ಮಾದರಿ ಹೇಗಾದಾರು? ಅಧಿಕಾರಕ್ಕಾಗಿ ಹಾತೊರೆಯುವ ಇವರಿಗೂ ರಾಜಕಾರಣಿಗಳಿಗೂ ವ್ಯತ್ಯಾಸವಾದರೂ ಏನು ಉಳಿದೀತು?
-ಪತ್ತಂಗಿ ಎಸ್. ಮುರಳಿ,ಬೆಂಗಳೂರು