ಉದ್ಯೋಗ ದೊರಕಿಸಿಕೊಳ್ಳಲು ಪರೀಕ್ಷೆಗೆಂದು ತಿಂಗಳಾನುಗಟ್ಟಲೆ ಗಂಭೀರವಾಗಿ ತಯಾರಿ ನಡೆಸಿ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಅದಾಗಲೇ ಹೈರಾಣಾಗಿದ್ದ ಅಭ್ಯರ್ಥಿಗಳಿಗೆ, ಇಂತಹ ಘಟನೆಗಳು ವ್ಯವಸ್ಥೆಯ ಬಗ್ಗೆ ಬೇಸರ ಹುಟ್ಟಿಸುತ್ತವೆ. ಆಯ್ಕೆ ಪ್ರಕ್ರಿಯೆಯ ಬಗ್ಗೆ ಸಂಪೂರ್ಣ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತವೆ. ಇಂತಹ ಅಪ್ರಾಮಾಣಿಕ ವ್ಯವಸ್ಥೆಯ ನಡುವೆ ಸತತ ಪರಿಶ್ರಮ ನಡೆಸಿ ನೌಕರಿ ಪಡೆಯಲು ಮಾಡುವ ಪ್ರಯತ್ನಗಳೆಲ್ಲ ನಿರರ್ಥಕ ಎಂದೆನಿಸುವುದರಲ್ಲಿ ಸಂದೇಹವಿಲ್ಲ. ಮೇಲಿನದು ಕೇವಲ ಒಬ್ಬರ ಅನುಭವವಾದರೆ, ಬೇರೆ ಬೇರೆ ಕೇಂದ್ರಗಳಲ್ಲಿ ಅಭ್ಯರ್ಥಿಗಳ ಕಣ್ಣ ಮುಂದೆ ನಡೆದ ಮೋಸದಾಟಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗಿದ್ದರೂ ಆಯೋಗ ಕಣ್ಣುಮುಚ್ಚಿ ಕುಳಿತಿರುವುದು ದುರದೃಷ್ಟಕರ ವಿಚಾರ.