ಪೊಲೀಸರ ಪ್ರಭಾವ: ಏನಿದರ ರಹಸ್ಯ?
ಮಂಗಳೂರಿನಲ್ಲಿ ವಂಚನೆ ಪ್ರಕರಣವೊಂದರಲ್ಲಿ ವಶಕ್ಕೆ ಪಡೆದಿದ್ದ ಐಷಾರಾಮಿ ಕಾರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಅಧಿಕಾರಿಗಳು ಅಮಾನತುಗೊಂಡಿದ್ದಾರೆ. ಇದರೊಂದಿಗೆ ಪೊಲೀಸ್
ವ್ಯವಸ್ಥೆಯಲ್ಲಿ ಡಕಾಯಿತಿ, ಸುಲಿಗೆ ಮನಃಸ್ಥಿತಿಯ ಕೆಲವು ಅಧಿಕಾರಿಗಳು ಇದ್ದಾರೆಂಬುದು ಮತ್ತೊಮ್ಮೆ ಮಗದೊಮ್ಮೆ ಸಾಬೀತಾಗುತ್ತಲೇ ಇದೆ.
ಈ ಹಿಂದೆ ಕೂಡ ಇಂಥದ್ದೇ ಕೃತ್ಯವನ್ನು ಹೋಲುವ ಹಲವಾರು ಪ್ರಕರಣಗಳು ಪೊಲೀಸ್ ಅಧಿಕಾರಿಗಳಿಂದ ನಡೆದಿರುವುದು ಬೆಳಕಿಗೆ ಬಂದಿದ್ದವು. ವ್ಯವಸ್ಥೆಯಲ್ಲಿ ದಕ್ಷತೆ ಕುಸಿದಿರುವುದು ಮತ್ತು ಏನು ಮಾಡಿದರೂ ಹಣ, ಪ್ರಭಾವ ಬಳಸಿ ಪಾರಾಗಬಹುದು ಎಂಬ ಬಲವಾದ ನಂಬಿಕೆ ಹುಸಿಯಾಗದಿರುವುದೇ ಈ ರೀತಿಯ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿರಬಹುದು. ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾದ ಉದಾಹರಣೆಗಳೇ ಇಲ್ಲ. ಏನಿದರ ರಹಸ್ಯ?
- ರಿಪ್ಪನ್ಪೇಟೆ ನಟರಾಜ್, ಬೆಂಗಳೂರು
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.