ಮನೆ ಮುಂದೆ ಭಿಕ್ಷೆ ಬೇಡಲು ಬಂದ ಭಿಕ್ಷುಕನಿಗೆ ಆ ಮನೆಯ ಸೊಸೆ, ‘ಏನೂ ಇಲ್ಲ ಮುಂದಕ್ಕೆ ಹೋಗಪ್ಪ’ ಎಂದಳಂತೆ. ಇದರಿಂದ ಉರಿದೆದ್ದ ಅತ್ತೆ, ‘ನೀನ್ಯಾವೋಳೆ ಭಿಕ್ಷುಕನನ್ನು ವಾಪಸ್ ಕಳಿಸೋಕೆ’ ಅಂತ ಹೇಳಿ, ಭಿಕ್ಷುಕನನ್ನು ಕರೆದು ‘ಮತ್ತೆ ಬೇಡು’ ಎಂದಳಂತೆ. ಭಿಕ್ಷುಕ ಉತ್ಸಾಹದಿಂದ ತನ್ನ ಬೇಡಿಕೆಯನ್ನು ಮತ್ತೆಮಂಡಿಸಿದ. ಆಗ ಅತ್ತೆ, ‘ಏನೂ ಇಲ್ಲ ಮುಂದಕ್ಕೆ ಹೋಗು’ ಎಂದಳಂತೆ! ಪ್ರತಿಮೆಯ ಪ್ರತಿಷ್ಠಾಪನೆ ಮೇಲಿನ ಕಥೆಯ ವಿಲೋಮದ ಹೋಲಿಕೆ ಎನ್ನಬಹುದೇ?! ಒಕ್ಕೂಟ ವ್ಯವಸ್ಥೆಯು ಅತ್ತೆ- ಸೊಸೆಯರ ಸಂಬಂಧದಂತಾದರೆ ರಾಜ್ಯಗಳ ಗತಿ ಏನು?