ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದಿರುವ ರಾಜ್ಯದ ಇಂಧನ ಸಚಿವರು, ಅಭಿವೃದ್ಧಿ ಕಾಮಗಾರಿಗಳ ವೆಚ್ಚದ ಕಾರಣ ನೀಡಿದ್ದಾರೆ. ಅದರ ಜೊತೆಗೇ, ಸರ್ಕಾರದ ಅನೇಕ ಇಲಾಖೆಗಳಿಂದ ವಿದ್ಯುತ್ ಸರಬರಾಜು ಕಂಪನಿಗಳಿಗೆ (ಎಸ್ಕಾಂ) ಬರಬೇಕಾದ ಬಾಕಿಯೇ ₹ 12,000 ಕೋಟಿ ಇದೆ ಅಂದಿದ್ದಾರೆ (ಪ್ರ.ವಾ., ಜ. 22). ಸರ್ಕಾರದ ಇಲಾಖೆಗಳೇ ಕಂಪನಿಗಳಿಗೆ ಅಷ್ಟು ಮೊತ್ತವನ್ನು ಬಾಕಿ ಇಟ್ಟು ಅವು ನಷ್ಟ ಅನುಭವಿಸುವಂತೆ ಮಾಡಿ, ಆ ಹೊರೆಯನ್ನು ಸಾಮಾನ್ಯ ಬಳಕೆದಾರರ ಮೇಲೆ ಹೊರಿಸುವುದು ಎಷ್ಟು ನ್ಯಾಯ?