ಪಂಚಮಸಾಲಿ ಮೂರನೇ ಪೀಠ ಸ್ಥಾಪನೆ ವಿಚಾರವಾಗಿ ಇತ್ತೀಚೆಗೆ ವಿವಾದ ಪ್ರಾರಂಭ ಆಗಿ ತಾರಕಕ್ಕೆ ಏರಿದೆ. ನಾನೂ ಈ ಪಂಚಮಸಾಲಿ ಸಮಾಜಕ್ಕೆ ಸೇರಿದ ಸಾಮಾನ್ಯರಲ್ಲಿ ಅತಿ ಸಾಮಾನ್ಯನಾಗಿದ್ದು, ಈ ವಿವಾದಗಳು, ಪರಸ್ಪರ ಕೆಸರೆರಚಾಟಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ನಮ್ಮ ಸಮಾಜದಲ್ಲಿ ಬಹಳಷ್ಟು ಜನ ತಮ್ಮ ಸಾಮರ್ಥ್ಯ, ಬುದ್ಧಿವಂತಿಕೆಗಳಿಂದ ಏಳಿಗೆ ಹೊಂದಿರುತ್ತಾರೆ ವಿನಾ ಸಮಾಜದ ರಾಜಕೀಯ ಮುಖಂಡರಿಂದ, ಪೀಠಗಳಿಂದ ಅಲ್ಲವೇ ಅಲ್ಲ ಎಂದು ಧೈರ್ಯವಾಗಿ ಎದೆ ತಟ್ಟಿಕೊಂಡು ಹೇಳುತ್ತೇನೆ.