ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲ್ಲದ ಕೆಸರೆರಚಾಟ

ಅಕ್ಷರ ಗಾತ್ರ

ಪಂಚಮಸಾಲಿ ಮೂರನೇ ಪೀಠ ಸ್ಥಾಪನೆ ವಿಚಾರವಾಗಿ ಇತ್ತೀಚೆಗೆ ವಿವಾದ ಪ್ರಾರಂಭ ಆಗಿ ತಾರಕಕ್ಕೆ ಏರಿದೆ. ನಾನೂ ಈ ಪಂಚಮಸಾಲಿ ಸಮಾಜಕ್ಕೆ ಸೇರಿದ ಸಾಮಾನ್ಯರಲ್ಲಿ ಅತಿ ಸಾಮಾನ್ಯನಾಗಿದ್ದು, ಈ ವಿವಾದಗಳು, ಪರಸ್ಪರ ಕೆಸರೆರಚಾಟಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ನಮ್ಮ ಸಮಾಜದಲ್ಲಿ ಬಹಳಷ್ಟು ಜನ ತಮ್ಮ ಸಾಮರ್ಥ್ಯ, ಬುದ್ಧಿವಂತಿಕೆಗಳಿಂದ ಏಳಿಗೆ ಹೊಂದಿರುತ್ತಾರೆ ವಿನಾ ಸಮಾಜದ ರಾಜಕೀಯ ಮುಖಂಡರಿಂದ, ಪೀಠಗಳಿಂದ ಅಲ್ಲವೇ ಅಲ್ಲ ಎಂದು ಧೈರ್ಯವಾಗಿ ಎದೆ ತಟ್ಟಿಕೊಂಡು ಹೇಳುತ್ತೇನೆ.

ಈ ಪೀಠಾಧಿಪತಿಗಳು, ಸಮಾಜದ ರಾಜಕೀಯ ಮುಖಂಡರು ಹೀಗೇ ಕಚ್ಚಾಡುತ್ತ ಇದ್ದರೆ ಇವರ ಮೇಲೆ ನಮಗೆ ಇರುವ ಗೌರವಕ್ಕೂ ಕುಂದುಂಟಾಗುತ್ತದೆ ಮತ್ತು ನಮ್ಮ ಸಮಾಜದ ಹೆಸರು ಕೆಡುತ್ತದೆ. ಇವರು ನಮ್ಮ ಸಮಾಜಕ್ಕೆ ಏನೂ ಉಪಕಾರ ಮಾಡುವುದು ಬೇಡ. ನಮಗೂ ಸ್ವಾಭಿಮಾನ ಇದೆ. ನ್ಯಾಯವಾಗಿ ದುಡಿದು, ನಮ್ಮ ಪ್ರತಿಭೆ, ಬುದ್ಧಿವಂತಿಕೆಗಳಿಂದ ಮುಂದೆ ಬರುತ್ತೇವೆ ವಿನಾ 2ಎ ಇತ್ಯಾದಿ ಭಿಕ್ಷೆಗಳಿಂದ ಅಲ್ಲ.

- ಶಾಂತವೀರ ಎಸ್.,ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT