ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ, ಪುನರ್ರಚನೆಯ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಜಿಲ್ಲಾ ಉಸ್ತು ವಾರಿ ಸಚಿವರ ನೇಮಕವಾಗಿದೆ. ಬಹುತೇಕ ಸಚಿವರನ್ನು ತಮ್ಮ ತವರು ಜಿಲ್ಲೆಗಳನ್ನು ಬಿಟ್ಟು ಬೇರೆ ಜಿಲ್ಲೆಗಳಿಗೆ ನೇಮಕ ಮಾಡಲಾಗಿದೆ. ರಾಜಕೀಯ ಸಂಘರ್ಷ ಏರ್ಪಡಬಾರದು ಎಂಬ ಕಾರಣದಿಂದ ಮುಖ್ಯಮಂತ್ರಿ ಈ ನಿರ್ಧಾರತೆಗೆದುಕೊಂಡಿದ್ದರೂ, ಅಭಿವೃದ್ಧಿ ವಿಚಾರವಾಗಿ ಇದು ಸೂಕ್ತ ನಿರ್ಧಾರವಲ್ಲ. ಬೇರೆ ಜಿಲ್ಲೆಗಳ ಸಚಿವರನ್ನು ಉಸ್ತುವಾರಿಯಾಗಿ ನೇಮಕ ಮಾಡುವುದರಿಂದ ಉಸ್ತುವಾರಿ ವಹಿಸಿಕೊಂಡ ಜಿಲ್ಲೆಗಳಲ್ಲಿ ಆ ಸಚಿವರು ಯಾವುದೇ ಸಭೆಗಳನ್ನು ನಡೆಸದೆ, ಜಿಲ್ಲೆಗೆ ಅಗತ್ಯಾನುಸಾರ ಭೇಟಿ ಕೊಡದೆ, ಸರ್ಕಾರಿ ಅಧಿಕಾರಿಗಳ ಸಭೆ ನಡೆಸದೇ ಇರುವುದ ರಿಂದ ಅಭಿವೃದ್ಧಿ ಕಾಮಗಾರಿಗಳು ಚುರುಕು ಪಡೆಯುವುದಿಲ್ಲ. ಈ ಕುರಿತು ಈಗಾಗಲೇ ಸಾರ್ವಜನಿಕರು ಅನೇಕ ಬಾರಿ ಅಸಮಾಧಾನ ವನ್ನು ವ್ಯಕ್ತಪಡಿಸಿದ್ದಾರೆ.