ಕೆಪಿಎಸ್ಸಿ ನೇಮಕಾತಿ ಅಕ್ರಮಗಳಿಗೆ ಸಂಬಂಧಿಸಿದ ಪತ್ರಿಕಾ ವರದಿಗಳನ್ನು ಓದಿದಾಗ, ಅಭ್ಯರ್ಥಿಗಳು ಎಷ್ಟು ಅಸಹಾಯಕರು ಎಂದೆನಿಸಿತು. ತಂದೆ ತಾಯಿ ‘ಇನ್ನು ನಿನ್ನ ಅಭ್ಯಾಸಕ್ಕೆ ನಮ್ಮಲ್ಲಿ ಹಣವಿಲ್ಲ ನಿಲ್ಲಿಸು’ ಎನ್ನುವರೇನೋ, ‘ಕೆಲವು ತಿಂಗಳಲ್ಲಿ ಅಧಿಸೂಚನೆ ಹೊರಡಿಸದಿದ್ದರೆ ನನ್ನ ವಯೋಮಿತಿ ಮೀರಿ ಹೋಗುವುದೇನೋ’ ಎಂಬಂತಹ ಪ್ರಶ್ನೆಗಳಿಗೆ ಉತ್ತರ ಸಿಗದೆ ಲಕ್ಷಾಂತರ ಮಂದಿ ತಳಮಳದಿಂದ ಜೀವನ ನಡೆಸುತ್ತಿದ್ದಾರೆ.