ಮೀಸಲಾತಿಯ ಮೂಲ ಉದ್ದೇಶ ಸಮಾಜದಲ್ಲಿ ಬಡವರಿಗೆ, ಅವಕಾಶ ವಂಚಿತರಿಗೆ ಮುಖ್ಯವಾಹಿನಿಯಲ್ಲಿನ ಇತರ ಜನವರ್ಗದೊಂದಿಗೆ ಸರಿ ಸಮಾನವಾಗಿ ಬಾಳುವ ಅವಕಾಶ ಮಾಡಿಕೊಡುವುದು. ಶಿಕ್ಷಣದಿಂದ ಹಿಡಿದು ನೌಕರಿಯವರೆಗೆ ಎಲ್ಲ ಕ್ಷೇತ್ರಗಳಲ್ಲಿಯೂ ಈ ಮೀಸಲಾತಿ ಇದೆ. ಜಾತಿ ಆಧಾರಿತ ಮೀಸಲಾತಿ ಬದಲು ಆದಾಯ ಆಧಾರಿತ ಮೀಸಲಾತಿ ತಂದಾಗ ಮಾತ್ರ ದೇಶದಲ್ಲಿನ ಸಾಮಾಜಿಕ ಅಂತರವನ್ನು ಕಡಿಮೆ ಮಾಡಲು ಸಾಧ್ಯ. ಮೀಸಲಾತಿಯ ಸಲುವಾಗಿ ಹೊಸ ಹೊಸ ನಿಗಮಗಳ ಸ್ಥಾಪನೆ ಹಾಗೂ ಮತದಾರರ ಓಲೈಕೆಗಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸುವುದರಿಂದ ಸಮಾಜಕ್ಕೆ ಯಾವ ಪ್ರಯೋಜನವೂ ಇಲ್ಲ. ಬದಲಾಗಿ ಜನರ ಮನಸ್ಸಿನಲ್ಲಿ ಜಾತಿಯ ಬಗ್ಗೆ ಇನ್ನಷ್ಟು ಪ್ರೀತಿ ಹುಟ್ಟಿ, ಜಾತಿ– ಮತದ ಬಗೆಹರಿಯಲಾಗದ ಅನುಪಯುಕ್ತ ಒಳ-ಜಗಳಗಳಿಗೆ ಕಾರಣವಾಗುತ್ತದೆ. ಹಾಗಾಗಿ ಜಾತಿ ಆಧಾರಿತ ಮೀಸಲಾತಿಯನ್ನು ಬಿಟ್ಟು ಆದಾಯ ಆಧಾರಿತ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೆ ತಂದಾಗ ಮಾತ್ರ ಸಾಮಾಜಿನ ಸಮಾನತೆ ಸಾಧ್ಯ.