ಸಮರ್ಪಕವಾಗಿ ಬೆಳೆ ಬರದೆ ನಷ್ಟ ಅನುಭವಿಸಿದ ರೈತರ ಸಾಲವನ್ನು ಮಾತ್ರವೇ ಸರ್ಕಾರ ಮನ್ನಾ ಮಾಡಬೇಕು. ಸಾಲ ಮನ್ನಾ ಮಾಡುತ್ತಾರೆ ಎಂಬ ಆಸೆಯಿಂದಲೇ ಬೆಳೆಸಾಲ ಮಾಡಿ ಕಟ್ಟದಿರುವವರನ್ನೂ ನಾವು ಕಂಡಿದ್ದೇವೆ. ಕಟ್ಟುವ ಸಾಮರ್ಥ್ಯವಿದ್ದೂ ಕಟ್ಟದೇ ಇರುವುದು ಮೋಸ ಅಲ್ಲವೇ? ಇಂತಹ ಪ್ರವೃತ್ತಿಗೆ ತಡೆ ಹಾಕಬೇಕು. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಸಾಲಮನ್ನಾ ವಿಷಯದ ಬಗ್ಗೆ ಮಾತ್ರ ಚರ್ಚೆ ಆಗುತ್ತಿದೆ. ಹಾಗಾದರೆ ನಮ್ಮನ್ನು ಕಾಡುತ್ತಿರುವ ಗಂಭೀರ ವಿಷಯ ಇದೊಂದೇ ಆಗಿದೆಯೇ?