ಶತಶತಮಾನಗಳಿಂದಲೂ ಭೂಭಾಗವಾಗಿ ಉಳಿದುಕೊಂಡು ಬಂದಿರುವ ಇಂಥ ಅಮೂಲ್ಯ ಶಿಲಾನಿಧಿಯು ನಿರ್ಗತಿಕರ ಪಾಲಿಗೆ ವಸತಿಯಾಗಿ, ಶ್ರೀಮಂತರ ಪಾಲಿಗೆ ವೈಯಕ್ತಿಕ ಮೋಜಿನ ತಾಣವಾಗಿ ಬದಲಾಗುತ್ತಿರುವುದು ದೌರ್ಭಾಗ್ಯ. ಹಣವಿದೆ ಎನ್ನುವ ಒಂದೇ ಕಾರಣಕ್ಕಾಗಿ ಎಕರೆಗಟ್ಟಲೆ ಶಿಲಾನಿಧಿಯನ್ನು ಲಪಟಾಯಿಸಿರುವುದನ್ನು ಸರ್ಕಾರವು ಇನ್ನಾದರೂ ತಡೆಗಟ್ಟಬೇಕು.