ಅಲ್ಲದೇ ಊರಿನ ಹಿರಿಯರ, ಮುಖಂಡರ, ಪೋಷಕರ ಮನವೊಲಿಸಬೇಕು. ಅವರ ಮೂಲಕ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು. ಈ ಪ್ರಯತ್ನ ಕೂಡ ಫಲ ಕೊಡದಿದ್ದರೂ ಉಳ್ಳವರ ಮಕ್ಕಳು ಬರದಿದ್ದರೂ ಬಡ ಕುಟುಂಬಗಳ ಮಕ್ಕಳಿಗೆ, ಕೂಲಿಕಾರರ ಮಕ್ಕಳಿಗೆ ಅನುಕೂಲ ಆಗಲಿ. ಯಾವ ಶಾಲೆಯನ್ನೂ ಮುಚ್ಚಬಾರದು. ಬೇರೆ ಶಾಲೆಯಲ್ಲಿ ವಿಲೀನಗೊಳಿಸುವ ಪ್ರಯತ್ನವನ್ನೂ ಮಾಡಬಾರದು. ಇದ್ದ ಶಾಲೆಗಳು ಮುಂದುವರೆಯಲಿ. ಅವನ್ನು ಮುಂದುವರೆಸುವುದು ಸರ್ಕಾರದ ಜವಾಬ್ದಾರಿ ಅಲ್ಲವೇ?