ಕರ್ನಾಟಕ ವಿಧಾನಸಭೆಗೆ 2018ರ ಮೇ ತಿಂಗಳಿನಲ್ಲಿ ಚುನಾವಣೆ ನಡೆದಿತ್ತು. ಇದಾದ ಬಳಿಕ ರಾಜಕೀಯ ಪಲ್ಲಟಗಳು ನಡೆದು, ನೂತನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರು ಪ್ರಮಾಣವಚನ ಸ್ವೀಕರಿಸಿಯೂ ಆಗಿದೆ. ಆದರೆ ಚುನಾವಣಾ ಕರ್ತವ್ಯ ನಡೆಸಿದ್ದ ಸಿಬ್ಬಂದಿಗೆ ಇನ್ನೂ ಭತ್ಯೆ ಬಂದಿಲ್ಲ.
ಒಂದು ಚುನಾವಣೆಯು ಯಾವುದೇ ಅಡೆತಡೆಗಳಿಲ್ಲದೆ ನಡೆಯಬೇಕೆಂದರೆ ಸಾವಿರಾರು ಮಂದಿ ಎರಡು ಮೂರು ತಿಂಗಳುಗಳ ಕಾಲ ರಾತ್ರಿ ಹಗಲೆನ್ನದೆ ದುಡಿಯಬೇಕಾಗುತ್ತದೆ. ಹೀಗೆ ಕೆಲಸ ಮಾಡಿದವರಿಗೆ ಚುನಾವಣೆ ಮುಗಿದು ಮೂರು ತಿಂಗಳಾದರೂ ಭತ್ಯೆ ನೀಡದಿರುವುದು ಸರ್ಕಾರದಿಂದಾದ ಲೋಪ. ಸಂಬಂಧಪಟ್ಟವರು ಕೂಡಲೇ ಭತ್ಯೆ ಪಾವತಿಗೆ ಕ್ರಮ ಕೈಗೊಳ್ಳಬೇಕು.