ಶಿವಮೊಗ್ಗದ ಮಂಚಾಲೆಯವರಾದ ನರಹರಿ, ಎಲ್ಎಲ್ಬಿ ಪದವೀಧರು. ಸಂಗೀತದಲ್ಲಿಯೇ ಬದುಕು ಕಂಡು ಕೊಳ್ಳಬೇಕು ಎಂದು ನಿರ್ಧರಿಸಿ, 1995ರಲ್ಲಿ ‘ಸೃಜನ ಸಂಗೀತ ಶಾಲೆ’ ಆರಂಭಿಸಿದರು. ಪ್ರಾರಂಭದಲ್ಲಿ ಶಾಲೆಗೆ ಸೇರಿದ್ದು ಬೆರಳೆಣಿಕೆಯಷ್ಟೇ ಮಕ್ಕಳಾದರು ಇಂದು ಆ ಶಾಲೆ ರಾಜ್ಯದ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಮಕ್ಕಳಿಗೆ ಸಂಗೀತ ಹೇಳಿಕೊಡುತ್ತಿದೆ.